ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಾಲಯ
ಸಿಗಂದೂರು ಶ್ರೀ ಚೌಡಮ್ಮ ದೇವಾಲಯ ಟ್ರಸ್ಟ್ (ರಿ).
ಸರ್ವಮಂಗಲ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ||
ಶರಣ್ಯೇತ್ರಯಂಬಕೆ ದೇವಿ ಸಿಗಂದೂರೇಶ್ವರೀ ನಮೋಸ್ತುತೆ||
ಓಂ ಶ್ರೀ ಸಿಗಂದೂರೇಶ್ವರಿ ನಿತ್ಯ ಮಹಂ ನಮಾಮಿ
ಮಾರ್ಗ
ಸಾಗರದಿಂದ ಆವಿನಹಳ್ಳಿ ದಾರಿಯಾಗಿ ಹೊಳೆಬಾಗಿಲುವರೆಗೆ ರಸ್ತೆಯಿದೆ. ಹೊಳೆಬಾಗಿಲಿನಲ್ಲಿ ಲಿಂಗನಮಕ್ಕಿ ಅಣೆಕಟ್ಟಿನ ಹಿನ್ನೀರು ಎದುರಾಗುತ್ತದೆ. ಇಲ್ಲಿ ಮುಂದೆ ಸೇತುವೆ ಇಲ್ಲ. ಲಾಂಚ್ ಬಳಸಿಕೊಂಡು ಹಿನ್ನೀರನ್ನು ದಾಟಬೇಕಾಗುತ್ತದೆ. ಈ ದಾರಿಯಾಗಿ ಬರುವ ಎಲ್ಲಾ ವಾಹನಗಳಿಗೂ ಈ ಲಾಂಚ್ ನ್ನು ಬಳಸುವುದು ಅನಿವಾರ್ಯ. ಹಿನ್ನೀರು ಸುಮಾರು 2 ಕಿ.ಮಿ. ಅಗಲವಿದೆ. ಲಾಂಚ್ ನಿಗದಿತ ಸಮಯಗಳಲ್ಲಿ ಮಾತ್ರ ಲಭ್ಯ. ಇನ್ನೊಂದು ದಡದಲ್ಲಿರುವ ಕಳಸವಳ್ಳಿಯಿಂದ ದೇವಸ್ಥಾನ ಸುಮಾರು 2 ಕಿ.ಮಿ. ದೂರದಲ್ಲಿದೆ.
ಕೊಲ್ಲೂರು ಇಂದ ಬರುವವರು ನಾಗೋಡಿ ಘಟ್ಟವನ್ನು ಏರಿ ನಾಗೋಡಿಯಿಂದ ತುಮರಿ ಮಾರ್ಗವಾಗಿ ಸಿಗಂದೂರಿಗೆ ಬರಬಹುದು. ಇಲ್ಲಿ ಯಾವುದೇ ಹಿನ್ನೀರು ಸಿಗುವುದಿಲ್ಲ. ಕೊಲ್ಲೂರಿನಿಂದ ಸಿಗಂದೂರು ಸುಮಾರು 45 ಕಿ.ಮಿ. ದೂರವಿದೆ.
ಸಾಗರ, ಶಿವಮೊಗ್ಗ ಮತ್ತು ಭಟ್ಕಳದಿಂದ ಸಿಗಂದೂರಿಗೆ ನೇರ ಬಸ್ ಸೌಲಭ್ಯವಿದೆ. ಹೆಚ್ಛಿನ ಬಸ್ಸುಗಳು ಇಲ್ಲದಿರುವುದರಿಂದ ಖಾಸಗಿ ವಾಹನ ಮಾಡಿಕೊಂಡು ಬರುವುದೊಳ್ಳೆಯದು.
ಸಿಗಂದೂರಿನಿಂದ ಹೊರಡಲು ಬಸ್ಸ್ ಹಾಗೂ ಲಾಂಚ್ ಸಮಯ
ಹೊಳೆಬಾಗಿಲು (ಸಾಗರ)ದ ಕಡೆಗೆ ಲಾಂಚ್ ಸಮಯ
ಬೆಳಿಗ್ಗೆ 8-00, 9-15, 10-15, 11-30
ಮಧ್ಯಾಹ್ನ 1-30, 2-45
ಸಂಜೆ 4-00, 4-40, 5-30
ಬಸ್ಸಿನ ಸಮಯ
ಸಾಗರ
ಬೆಳಿಗ್ಗೆ 9-45, 11-15
ಮಧ್ಯಾಹ್ನ 1-15, 2-30, 3-45
ಶಿವಮೊಗ್ಗ
ಬೆಳಿಗ್ಗೆ 7-30, 8-30
ಮಧ್ಯಾಹ್ನ 2-45
ಭಟ್ಕಳ;
ಬೆಳಿಗ್ಗೆ 6-45
ಮಧ್ಯಾಹ್ನ 1-45
ಕೃಪೆ: ಮಾಹಿತಿ ಫಲಕ ಸಿಗಂದೂರು ದೇವಸ್ಥಾನ
Copyright © 2018 www.sigandureshwari.com All rights reserved.